ಪೂಜ್ಯ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು.

ಚಿನ್ಮೂಲಾದ್ರಿಯ ಚಿತ್ಕಳೆಯಾದ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಜನಿಸಿದ್ದು ಚಿತ್ರದುರ್ಗದ ಸಾಸಲಟ್ಟಿಯ ಶರಣೆ ಗಂಗಮ್ಮ ಡಾ. ಎಸ್.ಆರ್ ಬಸಪ್ಪನವರ ಚಿದ್ಗರ್ಭದಲ್ಲಿ ದಿನಾಂಕ 13-03-1946 ರಂದು ಅವರ ಜನ್ಮ ನಾಮ ರತ್ನ. ತಮ್ಮ ಚಿಕ್ಕ ವಯಸ್ಸಿನಲ್ಲಿ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿ ಎಂಬ ನಾಮದೊಂದಿಗೆ ವಿಶ್ವಕ್ಕೆ ಪರಿಚಿತರಾದರು.

ಮರುಗದ ಗಿಡದಂತೆ ಹುಟ್ಟುತ್ತಲೇ ಪರಿಮಳವೆಂಬಂತೆ ಜ್ಞಾನ ಭಂಡಾರಿಯಾಗಿ, ಗುರು ಮುಟ್ಟಿ ಗುರುವಾಗಿ ಅನೇಕ ಬಿರುದುಗಳಿಂದ ಶೋಭಿಸುತಿದ್ದ ಮಾತೆ ಮಹಾದೇವಿಯವರು ತಮ್ಮ ಶಿಷ್ಯರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದು ಮಾತಾಜಿ ಎಂದು.

ಎಂ ಎ ತತ್ವಜ್ಞಾನಿಗಳಾಗಿದ್ದ ಪೂಜ್ಯ ಶ್ರೀ ಮಾತಾಜಿಯವರು; ಶ್ರೇಷ್ಠ ಸಾಹಿತಿ, ಸಂಶೋಧಕಿ, ಕವಿಯತ್ರಿ, ಲೇಖಕರಲ್ಲದೆ, ಉತ್ತಮ ವಾಗ್ಮಿಗಳಾಗಿದ್ದರು. ಪೂಜ್ಯ ಮಾತಾಜಿಯವರು. ಹುಟ್ಟು ಹೋರಾಟಗಾರರಾಗಿದ್ದ ಅವರು, 12ನೇ ಶತಮಾನದಲ್ಲಿ ಧರ್ಮ ಗುರು ಬಸವಣ್ಣನವರು ಸಂಸ್ಥಾಪಿಸಿ ಕೊಟ್ಟ ಲಿಂಗಾಯತ ಧರ್ಮದ ಪುನುರುತ್ಥಾನಕ್ಕಾಗಿ ವಚನ ಸಾಹಿತ್ಯವನ್ನ ಆಳವಾಗಿ ಆಧ್ಯಯನಿಸಿ ಸಮಾಜದಲ್ಲಿ ಬಸವತತ್ತ್ವ ಜಾರಿಗೆ ತರಲು ಅನೇಕ ಧಾರ್ಮಿಕ ಗ್ರಂಥಗಳನ್ನು ಬರೆದು ಅವುಗಳಿಗೆ ಧಾರ್ಮಿಕ ಚೌಕಟ್ಟನ್ನು ಒದಗಿಸಿ ಆವರಗೆ ಮೂಢನಂಬಿಕೆಯಲ್ಲಿದ್ದ ಲಿಂಗಾಯತರನ್ನು ಬಡಿದೆಬ್ಬಿಸಿ ನಿಜಾಚರಣೆಗಳನ್ನು ಕಲಿಸಿದರು.

ಪೂಜ್ಯ ಮಾತಾಜಿಯವರು ಎರಡು ನೂರಕ್ಕು ಹೆಚ್ಚು ಪುಸ್ತಕಗಳನ್ನು ಸ್ವತಃ ಬರೆದು, ವಿಶ್ವಕಲ್ಯಾಣ ಮಿಷನ್ ಸುಯಿಧಾನ ಸುಗ್ರಂಥ ಮಾಲೆಯಲ್ಲಿ ಪ್ರಕಾಶಿಸಿ 1000ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅದರಲ್ಲಿ ತರಂಗಿಣಿ, ಹೆಪ್ಪಿಟ್ಟ ಹಾಲು ಜನಪ್ರಿಯ ಕಾದಂಬರಿಗಳಿಗೆ ಕರ್ನಾಟಕ ರಾಜ್ಯ ಅಕಡಾಮಿ ಪ್ರಶಸ್ತಿ ಲಭಿಸಿವೆ. ಕಾಲೇಜ್ ವಿಧ್ಯಾರ್ಥಿಯಾಗಿದ್ದಾಗ ಬರೆದಿದ್ದ ಬಸವ ತತ್ತ್ವ ದರ್ಶನ ಪುಸ್ತಕವು ಎಂ ಎ ತತ್ತ್ವಜ್ಞಾನ ಓದುತ್ತಿದ್ದಾಗಿ ತಮಗೆನೇ ಪಠ್ಯ ಪುಸ್ತಕವಾಗಿ ಬಂದಿದ್ದು ಅವರ ವಿದ್ವತ್ತಗೆ ಹಿಡಿದ ಕೈಗನ್ನಡಿ.

ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಐದು ದಶಕಗಳಿಂದಲೂ ಬಸವತತ್ತಕ್ಕಾಗಿ ತಮ್ಮ ಜೀವನವನ್ನು ಶ್ರೀಗಂಧದಂತೆ ಸವೆಸಿದ ಪೂಜ್ಯ ಮಾತಾಜಿ; ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಸ್ವಾರ್ಥಕ್ಕಾಗಿ ಯಾರನ್ನು ಓಲೈಸಿದೆ, ನೇರ ನಡೆ-ನುಡಿ ಮತ್ತು ಜನಪರ ನಿಲುವುಗಳಿಗೆ ಹೆಸರುವಾಸಿಯಾಗಿದ್ದರಲ್ಲದೆ, ಮಹಿಳಾ ಜಗದ್ಗುರುಗಳಾಗಿ ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು. ಹೊರ ರಾಜ್ಯಗಳಲ್ಲಿ ಬಸವಧರ್ಮ ಸಮ್ಮೇಳನಗಳನ್ನು ಮಾಡಿ, ದೇಶ ವಿದೇಶದಲ್ಲಿ ಸಂಚರಿಸಿ ಬಸವ ತತ್ತ್ವವನ್ನು ವ್ಯಾಪಕವಾಗಿ ಪ್ರಚಾರ ಗೈದವರಲ್ಲಿ ಮೊದಲಿಗ

ಆರಂಭಿಕ ಜೀವನ

ವಿದ್ಯಾಭ್ಯಾಸ

ಸನ್ಯಾಸ ಜೀವನ

ಲಿಂಗಾಯತ ಧರ್ಮಕ್ಕೆ ಚೌಕಟ್ಟು

ಲಿಂಗೈಕ್ಯ