
Poojya Mate Gangadevi
ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ
ಬಸವಣ್ಣ ಹಾಗೂ ಸಮಕಾಲೀನ ಶರಣ, ಶರಣೆಯರ ಬದುಕು, ತತ್ವಗಳನ್ನು ಪ್ರವಚನ ಎಂಬ ಜಂಗಮ ಕಾಯಕದ ಭಿತ್ತರಿಸುತ್ತಿರುವ ಕೂಡಲಸಂಗಮ ಬಸವ ಧರ್ಮ ಪೀಠದ ಮೂರನೇ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಡಾ. ಮಾತೆ ಗಂಗಾದೇವಿಯವರು ಬೀದರ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ ಅಕ್ಟೋಬರ್ 16, 1958 ರಂದು ಜನಿಸಿದರು.
ಶರಣ. ಮಾಣಿಕ್ಯಪ್ಪ ಬೆಣ್ಣೆ, ಶರಣೆ. ಭಾಗೀರಥಿಬಾಯಿ ದಂಪತಿಗಳ ಮಗಳಾಗಿ ಜನಿಸಿದ ಗಂಗಮ್ಮನಿಗೆ ಪೂಜ್ಯಶ್ರೀ ಮಹಾಜಗದ್ಗುರು ಡಾ.ಮಾತೆ ಮಹಾದೇವಿ 16 ಜುಲೈ 1979 ರಂದು ಜಂಗಮ ದೀಕ್ಷೆ ನೀಡುವ ಮೂಲಕ ಮಾತೆ ಗಂಗಾದೇವಿ ಎಂದು ನಾಮಕರಣ ಮಾಡಿದರು.
ಪೂಜ್ಯಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿಯ ಆಧ್ಯಾತ್ಮಿಕ ಪರಿಸರದಲ್ಲಿ ಬೆಳದ ಮಾತೆ ಗಂಗಾದೇವಿ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತತ್ವ ಸಿದ್ಧಾಂತದ ಮೂಲಕ ಮುನ್ನಡೆಯುತ್ತಿದ್ದಾರೆ.