ಮಹಾಮಾನವತಾವಾದಿ, ಲಿಂಗಾಯತ ಧರ್ಮ ಸಂಸ್ಥಾಪಕ, ಶರಣ ಗಣಮಣಿ, ಧರ್ಮಗುರು ಬಸವಣ್ಣನವರ ಕಾರಣಿಕತ್ವ ಮತ್ತು ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು, ಬಸವ ಧರ್ಮೀಯರಾದ ಲಿಂಗಾಯತರು ಮತ್ತು ಬಸವ ತತ್ತ್ವಾಭಿಮಾನಿಗಳೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಒಂದು ಸ್ಥಳದಲ್ಲಿ ಸಮಾವೇಶವಾಗುವುದು ಅತ್ಯಂತ ಅವಶ್ಯಕ. ಇದು ಸಮಾನತ್ವ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಆದಿ ಶರಣರ ಸಂಕಲ್ಪದಂತೆ ಶರಣ ಮೇಳವನ್ನು ನಡೆಸಲಾಗುತ್ತಿದೆ. ಧರ್ಮಕರ್ತ ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲಸಂಗಮವನ್ನು ಲಿಂಗಾಯತ (ಬಸವ) ಧರ್ಮೀಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡು 1988ರ ಜನವರಿ 14, 15 ಮತ್ತು 16ರಂದು ಪ್ರಥಮ ಚಾರಿತ್ರಿಕ ಶರಣ ಮೇಳವನ್ನು ನಡೆಸಲಾಯಿತು. ಮೊಟ್ಟ ಮೊದಲನೆಯ ಚಾರಿತ್ರಿಕ ಶರಣ ಮೇಳವು ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನ ಸಮೂಹವನ್ನು ಆಕರ್ಷಿಸಿತು.
Event Details
Organizer : ಶರಣ ಮೇಳ ಶರಣ ಮೇಳ
Start Date : 2025-01-11
End Date : 2025-01-14
Time : 10 AM
Cost : 300
More About Event : Enroll