Contact Info

Latest Posts

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು.
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ

ದಯವೇ ಧರ್ಮದ ಮೂಲವಯ್ಯ.

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. Contact Us

ನೋಟದ ಭಕ್ತಿ ಬಸವನಿಂದಾಯಿತ್ತು; ಕೂಟದ ಜ್ಞಾನ ಬಸವನಿಂದಾಯಿತ್ತು .

Statue of Divinity

ಲಿಂಗಾಯತ ಧರ್ಮದ ಸಪ್ತಗಣಾಧಿಷರು

ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಸಕಲ ಜಿವಾತ್ಮರಿಗೆ ಲೆಸನು ಬಯಸಿದ ಕೂಡಲಸಂಗನ ಶರಣರೆ ಕುಲಜರು
ಬಸವ ಧರ್ಮ ಪೀಠಾಧ್ಯಕ್ಷರು ಬಸವ ಪೀಠವು ಎದ್ದು| ಒಸೆದು ನಾಣ್ಯವು ಹಿಟ್ಟಿ ಬಸವನ ಮುದ್ರೆ ಮೆರೆದಾವು| ಧರೆಯವಗೆ ವಶವಾಗದಿಹುದೆ ಸರ್ವಜ್ಞ ?
ಬಸವ ಧರ್ಮ ಮಹಾಜಗದ್ಗುರು ಪೀಠ

ಲಿಂಗಾಯತ ಧರ್ಮ ಸಂಸ್ಥಾಪಕರು, ಮಹಾನ್ ಪ್ರವಾದಿ ಗುರು ಬಸವಣ್ಣನವರು

 ಕೂಡಲಸಂಗಮ ಸುಕ್ಷೇತ್ರವು ಚಾರಿತ್ರಿಕ ಹಿನ್ನೆಲೆಯನ್ನೊಳಗೊಂಡ, ಸುಪ್ರಸಿದ್ಧ ಸಂಗಮೇಶ್ವರ ದೇವಾಲಯವನ್ನು ಹೊಂದಿದ ಧಾರ್ಮಿಕ ಸ್ಥಾನ. ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಿಂದಾಗಿ, ಇದೀಗ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಸುಂದರ ತಾಣ. ಚಿನ್ನಕ್ಕೆ ಸುವಾಸನೆ ಬಂದಂತೆ ಇಂತಹ ಕ್ಷೇತ್ರದ ಮಹಿಮೆ ವಿಶ್ವವಿಖ್ಯಾತಿಯನ್ನು ಹೊಂದುವಂತಾಗಿರುವುದು ವಿಶ್ವಗುರು ಬಸವಣ್ಣನವರ ಪಾದ ಸ್ಪರ್ಶದಿಂದಾಗಿ. “ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟುದು ಅವಿಮುಕ್ತ ಕ್ಷೇತ್ರ” ಎಂದು ಜಗನ್ಮಾತೆ ಅಕ್ಕಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯೆ ಮಹತ್ವದ ಧರ್ಮಕ್ಷೇತ್ರಗಳಾದಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರ.

ಇಂತಹ  ಕೂಡಲ ಸಂಗಮ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಶ್ರೀ ಗುರು ಬಸವಣ್ಣನವರ ದಿವ್ಯಪ್ರೇರಣೆಯಂತೆ, ಬಸವ ಧರ್ಮ ಪೀಠ ಎಂಬ ವಿಶ್ವಸ್ಥಸಂಸ್ಥೆ (ಟ್ರಸ್ಟ್)ಯೊಂದನ್ನು ಮುಂಬಯಿಯ 1950ನೇ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಾಯಿಸಲಾಗಿತ್ತು. ಈ ಕಾಯ್ದೆ ರದ್ದಾದ ಮೇಲೆ ಇಂಡಿಯನ್ ಟ್ರಸ್ಟ್ ಆಕ್ಟ್ ಪ್ರಕಾರ ನೋಂದಾಯಿಸಲಾಗಿದೆ.

For Truth, Justice, and Social Reform – Follow the Teachings of Basavanna.

ಬಸವ ಧರ್ಮ ಪೀಠದ ಮಹಾ ಜಗದ್ಗುರುಗಳು

ಪ್ರವಚನ ಪಿತಾಮಹ ಪೂಜ್ಯ ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು.

Poojya Lingananda Swamiji

ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗರು ಲಿಂಗಾನಂದ ಸ್ವಾಮೀಜಿಯವರು ವಿಶ್ವಗುರು ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ಮಣಿಗವಳ್ಳಿಯ ಮಾಣಿಕ್ಯವಾಗಿ ದಿನಾಂಕ 15-09-1931 ರಂದು ಜನಿಸಿ. ಬಿ.ಎ. ಆನರ್ಸ್ ಪದವೀಧರರಾಗಿ ಬಸವಗುರುವಿನ ಪ್ರೇರಣೆಯಿಂದ 25-04-1955 ರಂದು ಆಧ್ಯಾತ್ಮಿಕ ಮಾನಸಾಂತರ ಹೊಂದಿ 19-11-1956 ರಂದು ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೆ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನ ದಾಸೋಹ ಮಾಡುತ್ತಿದ್ದಂತಹ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜದ್ಗುರು ಲಿಂಗಾನಂದ ಸ್ವಾಮೀಜಿಯವರನ್ನು ಪ್ರವಚನ ಪಿತಾಮಹ, ಅಪೂರ್ವವಾಗ್ಮಿ, ಪ್ರತಿಭಾನ್ವಿತ ಚೇತನ, ಅಭಿನವ ವಿವೆಕಾನಂದ ಎಂದು ಸಮಾಜ ಕರೆಯುತ್ತಿದೆ.

ಪೂಜ್ಯಶ್ರೀ. ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು.

Poojya Mate Mahadevi Mataji

ವಿಶ್ವದ ಪ್ರಪ್ರಥಮ ಮಹಿಳಾ ಮಹಾಜಗದ್ಗುರು ಪರಮಪೂಜ್ಯ ಶ್ರೀಮನ್ನಿರಂಜನ ಡಾ. ಮಾತೆ ಮಹಾದೇವಿಯವರು ಚಿನ್ಮೂಲಾದ್ರಿಯ ಚಿತ್ಕಳೆಯಾಗಿ 1946ರಲ್ಲಿ ಜನ್ಮಿಸಿ, ವಿಜ್ಞಾನ ತತ್ತ್ವಜ್ಞಾನ ಸ್ನಾತಕೋತ್ತರ ಪದವೀಧರೆಯಾಗಿ 1966ರಲ್ಲಿ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂಗೈಕ್ಯ ಲಿಂಗಾನಂದ ಸ್ವಾಮಿಜಿಗಳಿಂದ ಜಂಗಮ ದೀಕ್ಷೆ ಪಡೆದು, “ಮಾತೆ ಮಹಾದೇವಿ” ಎಂಬ ಅಭಿಧಾನ ತಾಳಿ, 1970ರಲ್ಲಿ ವಿಶ್ವ ವಿನೂತನ ಸ್ತ್ರೀ ಜಗದ್ಗುರು ಪೀಠವನ್ನಲಂಕರಿಸಿ, ಭಕ್ತಿ-ಜ್ಞಾನ-ವಿರಕ್ತಿಗಳ ದಿವ್ಯ ಸಂಗಮವಾಗಿ ಶೋಭಿಸಿದರು. ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಜ್ಞಾನ ಗಳಿಸಿ, ಜಗದ ಜಾಗೃತಿಗಾಗಿ ಆ ಜ್ಞಾನಸುಧೆಯನ್ನು ಪ್ರವಚನ, ಗ್ರಂಥಗಳ ಮೂಲಕ ಜನತೆಗೆ ಧಾರೆಯೆರೆದಿದ್ದಾರೆ. ಶ್ರೀ ಮಾತಾಜಿಯವರ ಮೊದಲ ಕಾದಂಬರಿ “ಹೆಪ್ಪಿಟ್ಟ ಹಾಲು” ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಜಗನ್ಮಾತೆ ಅಕ್ಕಮಹಾದೇವಿಯವರ ಜೀವನ ಕುರಿತಾತ “ತರಂಗಿಣಿ” ಮಾತಾಜಿಯವರ ಹಸ್ತದಲ್ಲಿ ರೂಪುಗೊಂಡ ದ್ವಿತೀಯ ಕಾದಂಬರಿ.

ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ

Poojya Mate Gangadevi

ಬಸವಣ್ಣ ಹಾಗೂ ಸಮಕಾಲೀನ ಶರಣ, ಶರಣೆಯರ ಬದುಕು, ತತ್ವಗಳನ್ನು ಪ್ರವಚನ ಎಂಬ ಜಂಗಮ ಕಾಯಕದ ಭಿತ್ತರಿಸುತ್ತಿರುವ ಕೂಡಲಸಂಗಮ ಬಸವ ಧರ್ಮ ಪೀಠದ ಮೂರನೇ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಡಾ. ಮಾತೆ ಗಂಗಾದೇವಿಯವರು ಬೀದರ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ ಅಕ್ಟೋಬರ್ 16, 1958 ರಂದು ಜನಿಸಿದರು.
ಶರಣ. ಮಾಣಿಕ್ಯಪ್ಪ ಬೆಣ್ಣೆ, ಶರಣೆ. ಭಾಗೀರಥಿಬಾಯಿ ದಂಪತಿಗಳ ಮಗಳಾಗಿ ಜನಿಸಿದ ಗಂಗಮ್ಮನಿಗೆ ಪೂಜ್ಯಶ್ರೀ ಮಹಾಜಗದ್ಗುರು ಡಾ.ಮಾತೆ ಮಹಾದೇವಿ 16 ಜುಲೈ 1979 ರಂದು ಜಂಗಮ ದೀಕ್ಷೆ ನೀಡುವ ಮೂಲಕ ಮಾತೆ ಗಂಗಾದೇವಿ ಎಂದು ನಾಮಕರಣ ಮಾಡಿದರು.
ಪೂಜ್ಯಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿಯ ಆಧ್ಯಾತ್ಮಿಕ ಪರಿಸರದಲ್ಲಿ ಬೆಳದ ಮಾತೆ ಗಂಗಾದೇವಿ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತತ್ವ ಸಿದ್ಧಾಂತದ ಮೂಲಕ ಮುನ್ನಡೆಯುತ್ತಿದ್ದಾರೆ.

ಬಸವ ಪೀಠವು ಎದ್ದು | ಒಸೆದು ನಾಣ್ಯವು ಹುಟ್ಟಿ ಬಸವನ ಮುದ್ರೆ ಮೆರೆದಾವು | ಧರೆಯವಗೆ ವಶವಾಗದಿಹುದೆ ಸರ್ವಜ್ಞ ?||
Basava Dharma Peetha - ಬಸವ ಧರ್ಮ ಪೀಠ
MINISTRIES

ಬಸವ ಧರ್ಮದ ಮಹಾಜಗದ್ಗುರು ಪೀಠದ ಅಡಿಯಲ್ಲಿ ಬರುವ ಪಂಚ ಪೀಠಗಳು

Call Us

+91 95919 38666

info@basavadharmapeetha.org

Call Us

+91 95919 38666

info@basavadharmapeetha.org

866666

ಓಂ ಶ್ರೀ ಗುರು ಬಸವ ಲಿಂಗಾಯ ನಮಃ

Basava Dharma Peetha Branches

Bengaluru

ಬಸವ ಮಂಟಪ ವಿಶ್ವ ಕಲ್ಯಾಣ ಮಿಷನ್ # 2035, ಎರಡನೇ ಬ್ಲಾಕ್, 20 ನೇ ಮುಖ್ಯ ರಸ್ತೆ, ಬಸವ ಮಂಟಪ ರಸ್ತೆ ರಾಜಾಜಿನಗರ
. Param Pujya Sri Basavayogi Swamiji

Bengaluru

ಬಸವ ಮಂಟಪ ವಿಶ್ವ ಕಲ್ಯಾಣ ಮಿಷನ್ # 2035, ಎರಡನೇ ಬ್ಲಾಕ್, 20 ನೇ ಮುಖ್ಯ ರಸ್ತೆ, ಬಸವ ಮಂಟಪ ರಸ್ತೆ ರಾಜಾಜಿನಗರ
. Param Pujya Sri Basavayogi Swamiji

Kudala Sangama

Basava Dharma Peetha, Mahamane Mahamatha, Kudalasangama - 587115 Tq.Hunagunda, Dist. Bagalkote
. Pujya Sri Mahadeshwara Swamiji

Kudala Sangama

Basava Dharma Peetha, Mahamane Mahamatha, Kudalasangama - 587115 Tq.Hunagunda, Dist. Bagalkote
. Pujya Sri Mahadeshwara Swamiji

Basava Kalyana

Basava Dharma Peetha, Mahamane Mahamatha, Basava Kalyana Main Road, - 585327 Dist. Bidar
. Pujya Siddharameshwara Swamiji

Basava Kalyana

Basava Dharma Peetha, Mahamane Mahamatha, Basava Kalyana Main Road, - 585327 Dist. Bidar
. Pujya Siddharameshwara Swamiji

Dharawad

Jaganmata Akkamahadevi Aashrama Ulavi Road, Railway Gate, Dharwad - 580003
.

Dharawad

Jaganmata Akkamahadevi Aashrama Ulavi Road, Railway Gate, Dharwad - 580003
.

Bidar

Basava Mantapa, Near Chitralekha Talkies, Old City Bidar - 585401
. Vijayambika Mataji

Bidar

Basava Mantapa, Near Chitralekha Talkies, Old City Bidar - 585401
. Vijayambika Mataji

Chitradurga

Basava Mantapa, Near Rangayana Bagilu, Chitradurga - 577501
. Pujya Sri Mate Daneshwari

Chitradurga

Basava Mantapa, Near Rangayana Bagilu, Chitradurga - 577501
. Pujya Sri Mate Daneshwari

Allamagiri Maharashtra

Allamaprabhu Yoga Peetha Allamagiri, Alathe Hathkanangale, Dist. Kolhapur
. Pujya Sri Basavakumara Swamiji

Allamagiri Maharashtra

Allamaprabhu Yoga Peetha Allamagiri, Alathe Hathkanangale, Dist. Kolhapur
. Pujya Sri Basavakumara Swamiji

Hyderabad AP

Basava Mantapa, Keshava Swami Nagara, Jiyaguda, Near 2J Bus Stop, Hyderabad
. Pujya Sri Animishananda Swamiji

Hyderabad AP

Basava Mantapa, Keshava Swami Nagara, Jiyaguda, Near 2J Bus Stop, Hyderabad
. Pujya Sri Animishananda Swamiji

Delhi

Basava Mantapa, Maata Aashrama, H- 3/82, Bengali Colony, Mahaveer Enclave, New Delhi
. Pujya Sri Mate Sarvamangala

Delhi

Basava Mantapa, Maata Aashrama, H- 3/82, Bengali Colony, Mahaveer Enclave, New Delhi
. Pujya Sri Mate Sarvamangala